ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಆಹಾರ ಇಲಾಖೆಯು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-೨೦೧೩ ರಡಿ ಭಾರತ ದೇಶದಲ್ಲಿ ಪ್ರತಿಯೊಬ್ಬರಿಗೂ ಆಹಾರ ಕೊರತೆಯಾಗದಂತೆ ಹಸಿವು ಮುಕ್ತ ಭಾರತ ನಿರ್ಮಾಣ ಮಾಡಲು ಹಾಗೂ ನಾಗರೀಕ ಸರಬರಾಜು (ಅನಿಲ, ಅಗತ್ಯ ದಿನಸಿ) ವಸ್ತುಗಳು ಕೊರತೆಯಾಗದಂತೆ ಹಾಗೂ ಸರ್ವರಿಗೂ ದೊರೆಯುವಂತೆ ಮಾಡಲು ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಆದೇಶಗಳ ಅನುಷ್ಟಾನಕ್ಕಾಗಿ ಈ ಇಲಾಖೆಯು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪನಿರ್ದೇಶಕರ ಕಛೇರಿ ಇದ್ದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದೆ.
ಅನ್ನಭಾಗ್ಯ ಯೋಜನೆ:
೧. ಅಂತ್ಯೋದಯ ಅನ್ನ ಯೋಜನೆ(ಎ.ಎ.ವೈ):
ಬಡತನ ರೇಖೆಗಿಂತ ಕೆಳಗಿನ ಸ್ತರದ ಕುಟುಂಬಗಳಾದ ಭೂ ರಹಿತ ಕೃಷಿ ಕಾರ್ಮಿಕರು, ವಿಧವೆಯು ಮುಖ್ಯಸ್ಥರಾಗಿರುವ ಕುಟುಂಬಗಳು, ಯಾವುದೇ ನಿರ್ದಿಷ್ಟ ವರಮಾನವಿಲ್ಲದ ಹೆಚ್.ಐ.ವಿ ಪೀಡಿತರು/ಭಾಧಿತರು ಇರುವ ಕುಟುಂಬಗಳು, ಯಾವುದೇ ನಿಗಧಿತ ವರಮಾನವಿಲ್ಲದ ವೃದ್ದರು ಮುಖ್ಯಸ್ಥರಾಗಿರುವ ಕುಟುಂಬಗಳು ಈ ಯೋಜನೆಯ ವ್ಯಾಪ್ತಿಗೆ ಸೇರ್ಪಡೆಯಾಗಿರುತ್ತಾರೆ. ಈ ಯೋಜನೆಯಡಿ ಪ್ರತಿ ಕುಟುಂಬಗಳಿಗೆ ೩೫ ಕೆ.ಜಿ ಯಂತೆ ಪ್ರತಿ ಮಾಹೆ ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರಧಾನ್ಯವನ್ನು ವಿತರಿಸಲಾಗುತ್ತಿದೆ.
೨. ಆದ್ಯತಾ ಕುಟುಂಬ (ಬಿ.ಪಿ.ಎಲ್) ಪಡಿತರ ಸದಸ್ಯರಿಗೆ ಆಹಾರಧಾನ್ಯ ವಿತರಣೆ:
ಆದ್ಯತಾ ಕುಟುಂಬ (ಬಿ.ಪಿ.ಎಲ್) ಪಡಿತರ ಚೀಟಿದಾರರನ್ನು ಗುರುತಿಸಲು ಸರ್ಕಾರದ ಆದೇಶ ಸಂಖ್ಯೆ:ಆನಾಸ/೧೧೬/ಡಿ.ಆರ್.ಎ/೨೦೧೫, ದಿನಾಂಕ: ೨೫.೦೩.೨೦೧೭ರಲ್ಲಿ ೦೪ ಅಂಶಗಳ ಮಾನದಂಡಗಳನ್ನು ಕೆಳಕಂಡತೆ ನಿಗಧಿಪಡಿಸಲಾಗಿರುತ್ತದೆ.
• ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮoಡಳಿಗಳು/ನಿಗಮಗಳು/ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡತೆ ಆದಾಯ ತೆರಿಗೆ/ಸೇವಾ ತೆರಿಗೆ/ವ್ಯಾಟ್/ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು.
• ಗ್ರಾಮೀಣ ಪ್ರದೇಶಗಳಲ್ಲಿ ೦೩ ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶಗಳನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ ೧೦೦೦ ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು.
• ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು.
• ಕುಟುಂಬದ ವಾರ್ಷಿಕ ಆದಾಯವು ರೂ.೧.೨೦ ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು.
ಮೇಲಿನ೦ತೆ ಅರ್ಹರಿರುವ ಕುಟುಂಬಗಳು ಪಿ.ಹೆಚ್.ಹೆಚ್(ಬಿಪಿಎಲ್) ಪಡಿತರ ಚೀಟಿ ಪಡೆಯಲು ಅನರ್ಹರು ಎಂದು “ಹೊರಗಿಡುವ ಮಾನದಂಡವನ್ನು (Exclusion Criteria)” ಸರ್ಕಾರವು ನಿಗದಿಪಡಿಸಿದೆ. ಅದರನ್ವಯ ಅನ್ನಭಾಗ್ಯ ಯೋಜನೆಯಡಿ ಆದ್ಯತಾ ಕುಟುಂಬ(PHH) ಪ್ರತಿ ಸದಸ್ಯರಿಗೆ ೦೫ ಕೆ.ಜಿ ಆಹಾರಧಾನ್ಯ ಹಂಚಿಕೆಯನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ. ಹಾಗೂ ಉಳಿದ ೫ ಕೆ.ಜಿ. ಆಹಾರ ಧಾನ್ಯಗಳ ಬದಲು ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ಪ್ರತಿ ಕೆ.ಜಿ. ಅಕ್ಕಿಗೆ ರೂ.೩೪/- ಗಳಂತೆ ಪ್ರತಿ ಸದಸ್ಯರಿಗೆ ರೂ.೧೭೦/- ಗಳನ್ನು ಪಡಿತರ ಚೀಟಿಯ ಕುಟುಂಬ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಆಃಖಿ ಮೂಲಕ ಹಣವನ್ನು ಇದುವರೆಗೆ ವರ್ಗಾಯಿಸಲಾಗುತ್ತಿತ್ತು. ಅದರಂತೆ, ಜುಲೈ-೨೦೨೩ರ ಮಾಹೆಯಿಂದ ಡಿಸೆಂಬರ್-೨೦೨೪ರ ಮಾಹೆಯವರೆಗೆ ರೂ.೨೦೯.೦೬ ಕೋಟಿಗಳ ಮೊತ್ತವನ್ನು ಆಃಖಿ ಮೂಲಕ ವರ್ಗಾವಣೆ ಮಾಡಲಾಗಿರುತ್ತದೆ.
ಆದರೆ, ಕರ್ನಾಟಕ ರಾಜ್ಯ ಸರ್ಕಾರದ ಆದೇಶ ಸಂಖ್ಯೆ: ಆನಾಸ ೧೯೯ ಡಿಆರ್ಎ ೨೦೨೩(ಇ-ಆ), ದಿನಾಂಕ:೧೯-೦೨-೨೦೨೫ ಆದೇಶದನ್ವಯ, ಅನ್ನಭಾಗ್ಯ ಯೋಜನೆಯಡಿ ಫೆಬ್ರವರಿ-೨೦೨೫ರ ಮಾಹೆಯಿಂದ ಅನ್ವಯವಾಗುವಂತೆ ಅರ್ಹ ಫಲಾನುಭವಿಗಳಿಗೆ ಆಃಖಿ ಬದಲಿಗೆ ಹೆಚ್ಚುವರಿ ೫ ಕೆ.ಜಿ. ಅಕ್ಕಿಯನ್ನು ವಿತರಿಸಲು ಸೂಚನೆ ನೀಡಲಾಗಿದ್ದು, ಅದರಂತೆ ಕ್ರಮವಹಿಸಲಾಗುತ್ತಿದೆ.
ಆಹಾರ ಇಲಾಖೆಯ ಅಂಕಿ ಅಂಶಗಳು
ಕಾರ್ಡುಗಳ ವಿವರ ಕಾರ್ಡುಗಳ ಸಂಖ್ಯೆ ಒಟ್ಟು ಸದಸ್ಯರು
ಕಾರ್ಡುಗಳ ವಿವರ |
ಕಾರ್ಡುಗಳ ಸಂಖ್ಯೆ |
ಒಟ್ಟು ಸದಸ್ಯರು |
|
BPL |
AAY |
14,194 |
61,642 |
PHH |
2,16,926 |
7,45,614 |
|
APL |
NPHH |
24,046 |
85,699 |
ಒಟ್ಟು |
2,55,166 |
8,92,955 |
ಜಿಲ್ಲೆಯಲ್ಲಿ ಒಟ್ಟು ೩೭೫ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ.
ಅನ್ನಭಾಗ್ಯ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ೪,೭೨,೦೫೩ ಕ್ವಿಂಟಾಲ್ ಅಕ್ಕಿ ಹಾಗೂ ೮೧,೨೭೩ ಕ್ವಿಂಟಾಲ್ ರಾಗಿಯನ್ನು ವಿತರಿಸಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಜುಲೈ-೨೦೨೩ರ ಮಾಹೆಯಿಂದ ಡಿಸೆಂಬರ್-೨೦೨೪ರ ಮಾಹೆಯವರೆಗೆ ಪಡಿತರ ಚೀಟಿದಾರರ ಕುಟುಂಬ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ರೂ.೨೦೯.೦೬ ಕೋಟಿಗಳ ಮೊತ್ತವನ್ನು ನೇರ ನಗದು ವರ್ಗಾವಣೆ (ಆಃಖಿ) ಮುಖಾಂತರ ವರ್ಗಾವಣೆ ಮಾಡಲಾಗಿರುತ್ತದೆ.
ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಹಯೋಗದೊಂದಿಗೆ ೧೦೭ ಲಿಂಗತ್ವ ಅಲ್ಪಸಂಖ್ಯಾತರನ್ನು ಗುರುತಿಸಲಾಗಿದ್ದು, ಅವರಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದ ಅರ್ಹ ೮ ಜನರಿಗೆ ೨೦೨೪-೨೫ ನೇ ಸಾಲಿನಲ್ಲಿ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿಗಳನ್ನು ವಿತರಿಸಲಾಗಿರುತ್ತದೆ. ಇನ್ನುಳಿದ ಲಿಂಗತ್ವ ಅಲ್ಪಸಂಖ್ಯಾತರಿಗೆ ಮುಂದಿನ ದಿನಗಳಲ್ಲಿ ಪಡಿತರ ಚೀಟಿಗಳನ್ನು ವಿತರಿಸಿ “ಹಸಿವು ಮುಕ್ತ ಕರ್ನಾಟಕ” ಎಂಬ ಅನ್ನಭಾಗ್ಯ ಯೋಜನೆಯ ಧ್ಯೇಯೋದ್ದೇಶವನ್ನು ಸಾಕಾರಗೊಳಿಸಲಾಗುವುದು.
ಅನ್ನಭಾಗ್ಯ ಯೋಜನೆಯ ಫಲಿತಾಂಶಗಳು:
ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಧ್ಯೇಯದೊಂದಿಗೆ ಅನ್ನಭಾಗ್ಯ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿರುತ್ತದೆ. ಈ ಯೋಜನೆಯಡಿ ಪಡಿತರ ಚೀಟಿದಾರರಿಗೆ ಅಕ್ಕಿ ಮತ್ತು ರಾಗಿಯನ್ನು ಉಚಿತವಾಗಿ ವಿತರಿಸುತ್ತಿರುವುದರಿಂದ, ಪಡಿತರ ಫಲಾನುಭವಿಗಳಿಗೆ ಅಗತ್ಯ ಪೋಷಕಾಂಶಗಳ ಬೆಂಬಲವನ್ನು ನೀಡಿ ಅನ್ನಭಾಗ್ಯ ಯೋಜನೆಯ ಧ್ಯೇಯವನ್ನು ಹೆಚ್ಚಿನ ಮಟ್ಟದಲ್ಲಿ ಸಾಧಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಆಹಾರ ಧಾನ್ಯ ವಿತರಣೆ ಮಾಡುತ್ತಿರುವುದರಿಂದ ಫಲಾನುಭವಿ ಕುಟುಂಬಗಳ ದುಡಿಮೆಯನ್ನು ಕುಟುಂಬದ ಇತರೇ ಜೀವನಾವಶ್ಯಕ ಅಗತ್ಯಗಳಿಗಾಗಿ ಬಳಸುವುದರಿಂದ ಅವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದೆ. ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ರಾಗಿಯನ್ನು ಅನ್ನಭಾಗ್ಯ ಯೋಜನೆಯಲ್ಲಿ ಬಳಸಿಕೊಳ್ಳುತ್ತಿರುವುದರಿಂದ ಸ್ಥಳೀಯ ರೈತರಿಗೆ ನಿರೀಕ್ಷಿತ ಮಾರುಕಟ್ಟೆ ಲಭಿಸುತ್ತಿದ್ದು, ರೈತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಿರುವುದಲ್ಲದೇ, ಸ್ಥಳೀಯ ಆಹಾರ ಧಾನ್ಯಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯ ಸದುಪಯೋಗವನ್ನು ಕೇವಲ ಪುರುಷ ಮತ್ತು ಮಹಿಳೆಯರಿಗಲ್ಲದೇ ಲಿಂಗತ್ವ ಅಲ್ಪಸಂಖ್ಯಾತರಿಗೂ ಸಹ ವಿಸ್ತರಿಸಲಾಗಿದ್ದು, ಸಮಾಜದ ಪ್ರತಿಯೊಬ್ಬರಿಗೂ ಬಯಸಿದಂತೆ ಬದುಕುವ ಸಮಾನ ಹಕ್ಕುಗಳನ್ನು ನೀಡಲಾಗಿರುತ್ತದೆ. ಒಟ್ಟಾರೆಯಾಗಿ ಅನ್ನಭಾಗ್ಯ ಯೋಜನೆಯು ಪಡಿತರ ಫಲಾನುಭವಿ ಕುಟುಂಬಗಳಿಗೆ ಆಹಾರ ಭದ್ರತೆ ನೀಡಿ ಜೀವನ ಮಟ್ಟವನ್ನು ಸುಧಾರಿಸಿ ಘನತೆಯ ಬದುಕನ್ನು ಸಾಗಿಸಲು ಅತ್ಯಂತ ಸಹಕಾರಿಯಾಗಿದೆ.