Close

ದೀನ್ ದಯಾಳ್ ಅಂತ್ಯೋದಯ ಯೋಜನೆ –ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ–ನಲ್ಮ್):

ಯೋಜನೆಯ ಹಿನ್ನಲೆ:

  1. ಕೇಂದ್ರ ವಸತಿ ಮತ್ತು ನಗರ್ ಬಡತನ ನರ‍್ಮೂಲನ ಮಂತ್ರಾಲಯ, ಭಾರತ ರ‍್ಕಾರ, ನವದೆಹಲಿ ರವರು ಸ್ರ‍್ಣ ಜಯಂತಿ ಶಹರಿ ರೋಜ್‍ಗಾರ್ ಯೋಜನೆಯನ್ನು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯೆಂದು ಮರುನಾಮಕರಣ ಮಾಡಿ ೨೦೧೪-೧೫ನೇ ಸಾಲಿನಿಂದ ಅನುಷ್ಠಾನಗೊಳಿಸಲು ಆದೇಶವನ್ನು ಹೊರಡಿಸಿರುತ್ತಾರೆ. ಸದರಿ ಯೋಜನೆಯು ರಾಜ್ಯದ ೩೫ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿತ್ತು. ಬಾಕಿ ಉಳಿದ ೧೭೯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಲ್ಮ್ ಮಾದರಿಯಲ್ಲಿಯೇ ನಲ್ಮ್-ರಾಜ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿರುತ್ತದೆ.
  2. 2016-17ನೇ ಸಾಲಿನಲ್ಲಿ ನಲ್ಮ್ ಯೋಜನೆಯನ್ನು ದೀನದಯಾಳ್ ಅಂತ್ಯೋದಯ ನಲ್ಮ್ ಅಭಿಯಾನ ಎಂದು ಮರುನಾಮಕರಣ ಮಾಡಿ ೨೭೭ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸುವಂತೆ ಆದೇಶವನ್ನು ಹೊರಡಿಸಿರುತ್ತಾರೆ.
  3. ರಾಜ್ಯದಲ್ಲಿ ಡೇ-ನಲ್ಮ್ ಯೋಜನೆಯನ್ನು ಅನುಷ್ಠಾನಗೊಳಿಸಲು ರ‍್ಕಾರದಿಂದ ದಿನಾಂಕ:01.10.2016 ರಂದು ಆದೇಶವನ್ನು ಹೊರಡಿಸಿರುತ್ತಾರೆ.

ಯೋಜನೆಯ ಉದ್ದೇಶಃ

  1. ನಗರದ ಬಡಜನರನ್ನು ಬಡತನ ರೇಖೆಯಿಂದ ಮೇಲೆ ತರುವುದು.
  2. ನಗರ ಪ್ರದೇಶದ ಮಹಿಳಾ ಸ್ವ-ಸಹಾಯ ಸಂಘ, ನಗರ/ಪ್ರದೇಶ ಮಟ್ಟದ ಒಕ್ಕೂಟಗಳ ರಚನೆ ಮತ್ತು ಸದಸ್ಯರ ಸಬಲೀಕರಣ.
  3. ನಗರದ ನಿರುದ್ಯೋಗ ಯುವಕ ಯುವತಿಯರಿಗೆ ಉಚಿತವಾಗಿ ಉದ್ಯೋಗಾಧರಿತ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನೀಡುವುದು.
  4. ನಗರ ಪ್ರದೇಶದಲ್ಲಿನ ಬಡವರಿಗೆ ವೈಯಕ್ತಿಕ ಮತ್ತು ಗುಂಪು ಕಿರು ಉದ್ದಿಮೆಯನ್ನು ಸ್ಥಾಪಿಸಲು ಬ್ಯಾಂಕುಗಳಿಂದ ಸಾಲ ಮತ್ತು ಬಡ್ಡಿ ಸಹಾಯಧನವನ್ನು ಒದಗಿಸುವುದು.
  5. ನಗರ ಪ್ರದೇಶದ ಬೀದಿ ವ್ಯಾಪಾರಸ್ಥರನ್ನು ಗುರುತಿಸಿ, ಗುರುತಿನ ಚೀಟಿ ವಿತರಣೆ ಹಾಗೂ ಇತರೆ ಸಾಮಾಜಿಕ ಭದ್ರತಾ ಯೋಜನೆಗಳೊಂದಿಗೆ ಸಂರ‍್ಕ ಕಲ್ಪಿಸುವುದು.
  6. ನಗರ ಪ್ರದೇಶದ ವಸತಿ ರಹಿತರಿಗೆ ೨೪್ಠ೭ ವಸತಿ ತಂಗುದಾಣವನ್ನು ಒದಗಿಸುವುದು.